ಮುಗ್ಡ ಮನಸಿನ ‘ಕಲರ್’ವ!!!

Posted October 30, 2009 by Puneeth B.A.
Categories: ಕವಿಯ ಕಾವ್ಯಧಾರೆ..

ಕನಸಿನ ಲೋಕಕೆ ಮೊದಲ ಹೆಜ್ಜೆ
ಮನದ ಕಾಲಿಗೆ ಮೊದಲ ಗೆಜ್ಜೆ


..
..

ಇನ್ನು ಇದೆ…ಸದ್ಯಕ್ಕೆ ಹೊಳಿತಾ ಇಲ್ಲ…ಆಮೇಲೆ ಬರಿತೀನಿ…
ಅತಿ ಶೀಘ್ರದಲ್ಲಿ…

ಸಪ್ತರಂಗಿ!!

Posted October 30, 2009 by Puneeth B.A.
Categories: ಕವಿಯ ಕಾವ್ಯಧಾರೆ..

ಸಪ್ತರಂಗಿ..ಸಪ್ತರಂಗಿ..
ಸಪ್ತ ಬಣ್ಣಗಳೇ ನಿನ್ನ ಅಂಗಿ

ರಂಗು ರಂಗು ರಂಗಿದೆ
ಮನಕೆ ನಲಿವು ತಂದಿದೆ
ಕಾಮನ್ ಬಿಲ್ಲು ಮೂಡಿದೆ
ಬಾನು ರಂಗೇರಿದೆ

ಸಪ್ತರಂಗಿ..ಸಪ್ತರಂಗಿ..
ಸಪ್ತ ಬಣ್ಣಗಳೇ ನಿನ್ನ ಅಂಗಿ

ಪುರ್ ಅಂತ ಹಾರುವೆ
ಖುಷಿಯ ಹಂಚಿ ಹೋಗುವೆ
ನಗುವ ಬುತ್ತಿ ಹೊತ್ತು ನೀನು
ಬೆಳ್ಳಿ ಬೆಳಕ ತೋರುವೆ

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್

ಗಾಳಿಪಟ!!

Posted April 29, 2009 by Puneeth B.A.
Categories: ಕವಿಯ ಕಾವ್ಯಧಾರೆ..

ಹೇ ಗಾಳಿಪಟ..

ರಂಗು-ರಂಗಿನ ಗಾಳಿಪಟ

ಭೂಪಟವೇ ಚಿತ್ರಪಟ

ಹಾರಾಟವೇ ನಿನ್ನ ಹಟ

 

ಬಾಲಂಗೊಚಿಯ ಪಟ-ಪಟ ಬಡಿದು

ಕನಸಿನ ಲೋಕದ ಬೀಗವ ಹಿಡಿದು

ಬಾನಿಗೆ ಹಾರೋ ಪಟ

ಮುಗಿಲಿಗೆ ಮುತ್ತಿಡೊ ಹಟ

 

ಬಾನಿಗೆ ಬಣ್ಣ ತುಂಬುವ ಆಸೆ

ಮೋಡವ ಕಂಡು ನಲಿಯುವ ಆಸೆ

ಬಣ್ಣ-ಬಣ್ಣದ ಪಟವು ಇದುವೆ

ಚಂದ್ರನೆ ನಾಚುವ ಬೆಳಕು ಇದುವೆ

 

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್

ಹಾಗೆ ಸುಮ್ಮನೆಯಲ್ಲಿ ಬಿ.ಸುರೇಶ್!!

Posted April 26, 2009 by Puneeth B.A.
Categories: ಪಿಸು..ಪಿಸು

ಬಿ.ಸುರೇಶ್ – ಕನ್ನಡದ ಉತ್ತಮ ನಿರ್ದೇಶಕ.ಹದ ಗೆಟ್ಟು,ಕಥೆಯನ್ನೇ ಹಾಳು ಮಾಡಿ ಧಾರಾವಾಹಿಗಳನ್ನು ಮಾಡುವ ಸಮಯದಲ್ಲಿ,ಬಿ.ಸುರೇಶ್ ರವರ ‘ನಾಕು ತಂತಿ’ ಮತ್ತು ‘ತಕಧಿಮಿತಾ’ ತಂತಿ ತಪ್ಪದೆ ಸರಿ ಹಾದಿಯಲ್ಲಿ ಹೋಗುತ್ತಿರುವುದು ಬಹಳ ವಿಶೇಷ.ಬಿ.ಸುರೇಶ್ ಬಹಳ ಒಳ್ಳೆಯ ಬರಹಗಾರ,ನಿರ್ದೆಶಕ,ರಂಗಕರ್ಮಿ,ನಟ(ಅಧ್ಬುತ!!).

ಬಿ.ಸುರೇಶ್ ರವರು ನನಗೆ ಮತ್ತು ನನ್ನ ಪ್ರೀತಿಯ ಬ್ಲಾಗ್ ‘ಹಾಗೆ ಸುಮ್ಮನೆ’ ಗೆ ಕೆಲವು ಹಿತನುಡಿಗಳನ್ನು ಕಳುಹಿಸಿದ್ದಾರೆ.ಅದನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟ ಪಡುತ್ತೀನಿ.ನೀವೂ ಒದಿರಿ.

“ನಾನು ಬರೆದುದೆಲ್ಲವೂ ಹಾಗೇ ಸುಮ್ಮನೆ.

ಅವುಗಳಿಂದ ನಿಮಗೇನಾದರೂ ದಕ್ಕಿದ್ದರೆ ಅದೂ ಹಾಗೇ ಸುಮ್ಮನೆ.

ಬದುಕು ಅನ್ನೋದೇ ಹಾಗೇ ಸುಮ್ಮನೆ

ದಕ್ಕಿಸಕೊಳ್ಲಬೇಕೆಂದಿಲ್ಲ.

ಬದುಕಬೇಕಷ್ಟೆ, ಹಾಗೇ ಸುಮ್ಮನೆ

-ನಿಮ್ಮವ
ಬಿ.ಸುರೇಶ”

-‘ಹಾಗೆ ಸುಮ್ಮನೆ’ ಪುನೀತ್

ಬಣ್ಣದ ಲೋಕ

Posted January 25, 2009 by Puneeth B.A.
Categories: ಕವಿಯ ಕಾವ್ಯಧಾರೆ..

ಬಣ್ಣದ ರೆಕ್ಕೆಯ ಬೆನ್ನಲಿ ಮೂಡಿಸಿ

ಹಾರುವ ಹಕ್ಕಿ ಆಗೋಣ

ಬಣ್ಣದ ಲೋಕಕೆ ಹೋಗೋಣ

ತೇಲುತಾ..ಹಾರುತಾ ಹೋಗೋಣ

 

ಜಿಗಿಯುತಾ ಜಾಲಿ ಮಾಡೋಣ

ತೆಲುತಾ..ಹಾರುತಾ ಹೋಗೋಣ

ಶಾಲೆಯ ಗೋಜು ಅಲ್ಲಿಲ್ಲ

ಬಣ್ಣಗಳಾಟ ನಮಗೆಲ್ಲಾ..

 

ಲೋಕದ ಬಾಗಿಲು ತೆರೆದಿತ್ತು

ಬಣ್ಣದ ಹೊಳೆಯು ಹರಿದಿತ್ತು

ಕಾಮನಬಿಲ್ಲು ಅಲ್ಲಿತ್ತು

ಸ್ವಾಗತ ಮಾಡಲು ಗುಲಾಬಿ ಸಾಲೆ ಅಲ್ಲಿತ್ತು..

 

-ನಿಮ್ಮ ‘ ಹಾಗೆ ಸುಮ್ಮನೆ ‘ಪುನೀತ್.ಬಿ.ಎ.

ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…

Posted December 31, 2008 by Puneeth B.A.
Categories: ಗುಸು..ಗುಸು..

Picture

ಲಂಚ ತೆಗೆದುಕೊಳ್ಳೋರ ಮಕ್ಕಳು ಲೂಸ್ ಮಾದ ಆಗ್ತಾರಂತೆ….ಮೆಂಟಲ್ ಮಂಜಿ ಆಗ್ತಾರಂತೆ..

ಈ ವಿಷಯನಾ ನಾನ್ ಹೇಳುತಿರುವುದಲ್ಲ…ಲಂಚ ತಗೋಂಡ  ಮಹಾ ಪುರುಷರ ಮಕ್ಕಳನ್ನು ನೋಡಿ ಈ ಮಾತನ್ನು ಹೇಳುತಿದ್ದೇನೆ…ಲಂಚ ತಗೋಳೊದು ಕೆಮ್ಮು , ನೆಗಡಿ ತರಹದ ಕಾಯಿಲೆಯಲ್ಲ…diabetes ತರಹದ ಕಾಯಿಲೆ..ಒಂದು ಸತಿ ಬಂದ್ರೆ…ಜಪ್ಪಯ್ಯ ಅಂದ್ರೂ ಹೋಗುವುದಿಲ್ಲ…ಒಂದು ಸತಿ ಲಂಚಕ್ಕೆ ತೆಗೆದ ಬಾಯಿ ಮುಚ್ಚುವುದಿಲ್ಲ..ಲಂಚ ಅಂದ್ರೆ ಇನ್ನೊಬ್ಬರ ಶಾಪ ಅಂತ ಅರ್ಥ..ಲಂಚ ಕೊಡುವ ಯಾರಾದರೂ ಪ್ರೀತಿಯಿಂದ,ಅಕ್ಕರೆಯಿಂದ ಕೊಟ್ಟಾರಿಯೇ??ಶಾಪ ಹಾಕಿ ಕೊಡುತ್ತಾರೆ…ಇದು ಹೇಗೆ ಲಂಚ ತೆಗೆದುಕೊಂಡವರಿಗೆ ಒಳ್ಳೆದನ್ನ ಮಾಡಿತು…ಅವರುಗಳು ಮಾಡುವ ಕಚಡಾ ಕೆಲಸಕ್ಕೆ ಪಾಪ ಅವರ ಮಕ್ಕಳು ಬಲಿಯಾಗುತಿದ್ದಾರೆ…ಲಂಚ ತೆಗೆದುಕೊಂಡವರ ಮಕ್ಕಳು ಹುಚ್ಚಾರಾಗುತ್ತಿದ್ದಾರೆ..ಒಬ್ಬ(????) ಸಕತ್ತಾಗಿ ಲಂಚ ಹೋಡಿತಾನೆ..ಪಾಪ ಅವನ ಮನೆಯಲ್ಲಿ ಮಕ್ಕಳು–ಒಂದು ಹುಟ್ಟಿದಂದಿನಿಂದ ಕೈಯಿಲ್ಲದೆ ಹೋದರೆ,ಇನ್ನೊಂದಕ್ಕೆ ತಲೆ ಸರಿಯಿಲ್ಲದೆ ಸದಾ ಮಂಚದ ಮೇಲೆ ಬಿದ್ದಿರುತ್ತೆ…ಇದು ಬೇಕಾ..ಅಷ್ಟೊಂದು ಹಣ ದುಡಿದು ಎನು ತಿಥಿಗೆ ಇಟ್ಕೊತಾರ…     ಇನ್ನೊಬ್ಬರಿದ್ದಾರೆ (????)-ಅವರೂ ಸಕತ್ತಾಗಿ ಲಂಚ ಹೋಡಿತಾರೆ…ಆದರೆ ಎನು ಮಾಡೋದು..ಮನೆಯಲ್ಲಿ ಮಗನಿಗೆ ಹುಚ್ಚು…ಆ ಮಗನಿಗೆ ಹುಚ್ಚು ಅಂದು ಬಿಟ್ಟು, ಮನೆಯ ತುಂಬಾ ನಾಯಿಗಳನ್ನ ಸಾಕಿದ್ದಾರೆ(ಅಕ್ರಮ ದುಡ್ಡನ್ನು ರಕ್ಷಿಸಲು)..ಆ ನಾಯಿಗಳನ್ನು ಕರೆದುಕೊಂಡು ಇವರು ವಾಕಿಂಗ್ ಹೋಗ್ತಾರೆ…ಅದು ಒಡುತಿರುತ್ತದೆ…ಅದರ ಹಿಂದೆ ಇವರು ಒಡುತಿರುತ್ತಾರೆ…ಯಾರು ನಾಯಿ…ಯಾರು master ಎಂಬುದೇ ಗೊತ್ತಾಗುವುದಿಲ್ಲ….ಇಬ್ಬರು ದೂರದಿಂದ ನೋಡಿದರೆ ಒಂದೇ ರೀತಿ ಕಾಣ್ತಾರೆ…ಇಬ್ಬರೂ ಒಂದೆ ಜಾತಿಯಲ್ವ…ನಾಯಿ  ಮೂಳೆಯನ್ನು ನೋಡಿ ಜೊಲ್ಲು ಸುರಿಸುತ್ತೆ…ಲಂಚಕೋರ ಹಣವನ್ನು ನೋಡಿ ಜೊಲ್ಲು ಸುರಿಸುತ್ತಾನೆ….ಇವೆಲ್ಲವನ್ನೂ ಕಂಡರೆ…ನಾನು ಹೇಳಿದ ವಿಚಾರ ನಿಜ ಎನಿಸುತ್ತದೆ….ಇದು ಸುಮ್ಮನೆ ಕೇಳಿ ನಕ್ಕು ಸುಮ್ಮನಾಗುವ ವಿಷಯವಲ್ಲ….ಯಾರದೋ ತಪ್ಪಿಗೆ….ಯಾರೋ ಯಾಕೆ ನೋವು ಅನುಭವಿಸ ಬೇಕು…ದೇವರು ಹಾಗೆ ಸುಮ್ಮನೆ  ಕೂತು ಕೈ ಚಳಕ ತೋರಿಸುತ್ತಿದ್ದಾನೆ…ಈಗಲಾದರು ಎಚ್ಚರಗೊಳ್ಳಿ “ಮಿ.ಲಂಚನಾಥ್”..

ಎಲ್ಲರಿಗೂ ಹೇಳಿ:”ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…”

ಈ ವಿಚಾರ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗೋ ಮುನ್ನ ತಿಳಿಸಿ..!!!

 -ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್….

ನಾನೇ ಆರತಿ!!-(ಭಾಗ-3)

Posted December 31, 2008 by Puneeth B.A.
Categories: ಪಿಸು..ಪಿಸು

ಭಾಗ-2 ರಿಂದ ಮುಂದುವರೆದಿದೆ….

ಭಾಗ-3:

………..ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ…ನಾನು ಆರತಿಯವರ ತರಹನೇ ಮಿಮಿಕ್ರಿ ಮಾಡಲು ಆರಂಭಿಸಿದ್ದೆ…ಆ ಮಿಮಿಕ್ರಿಗೆ ಪ್ರೋತ್ಸಾಹಿಸಿದವರು ಬಿಂಬದ ಮಂದಿ…ಬಿಂಬಕ್ಕೆ ಬರುವ ಅತಿಥಿಗಳ ಮುಂದೆಯಲ್ಲ ನಾನು ಆರತಿ ತರ ಮಾಡಲು ಆರಂಬಿಸಿದೆ…ತಾತ(ಎ.ಎಸ್.ಮೂರ್ತಿ)ಅವರು ಮಿಮಿಕ್ರಿ ಮಾಡಲು ಕರದಾಗಲೆಲ್ಲ..ಖುಷಿಯಿಂದ ಹೋಗಿ ಮಾಡು ಬರುತಿದ್ದೆ..ನನ್ನ ಹೆಸರು ತಿಳಿಯದ ಕೆಲವರು ನನ್ನನ್ನು ‘ಆರತಿ’ಎಂದೆ ಕರಯಲು ಪ್ರಾರಂಭಿಸಿದರು…ಕೆಲವೊಮ್ಮೆ ಇದರಿಂದಾಗಿ ಮುಜುಗುರವೂ ಆಗುತಿತ್ತು…ಆ ವಿಷಯ ಬಿಡಿ..ನಂತರ ಆರತಿಯವರು ಪ್ರಕಾಶ್ ಸರ್ ಗೆ ಎಲ್ಲವನ್ನು ಹೇಳಿದರು…ಸರ್ ನನ್ನ ಕರೆದು ಒಂದು ವಾರದ ಕಾಲ ಒಂದು ಬೊಂಬೆಯಾಟದ ದೃಶ್ಯವನ್ನು ಹೇಳಿಕೊಟ್ಟರು..ಕಲಿತ ಮೇಲೆ ಒಂದು ದಿನ ಆರತಿಯವರು ಬಿಂಬಕ್ಕೆ ಬಂದು..ನಾನು readyಯಾಗಿದ್ದ ದೃಶ್ಯವನ್ನು ಮಾಡಲು ಹೇಳಿದರು…ಮಾಡಿದ ಮೇಲೆ ಒಂದು ಮುತ್ತು ಕೊಟ್ಟು ಹೋದರು…(ಎಷ್ಟೆ ಆಗಲಿ ಅಮೇರಿಕದವರು ತಾನೆ…)ನಂತರ shooting ಅಕ್ಕಯ್ಯಮ್ಮನ ಬೆಟ್ಟದಲ್ಲಿ ನಡೆಯಿತು…shootingಗೆ ನನ್ನ ಜೊತೆ ಅನ್ವಿತಾ,ರೋಹಿತ್,ಕಿರಣ್,ಬಿಂದು(ಈಗ ಅವಳು ನಮ್ಮೊಂದಿಗಿಲ್ಲ…) ಎಲ್ಲರೂ ಬಂದರು…shooting ಚೆನ್ನಾಗಿ ನಡೆಯಿತು…shooting spotಲ್ಲಿ ಬಹಳ ವಿನೋದ ನಡೆಯಿತು…ಸಂಜೆ ಮನೆಗೆ ಬಂದೆ…ಸ್ವಲ್ಪ ದಿನ ಆದ ಮೇಲೆ ಹೋಗಿ dubbing ಮಾಡಿಕೊಂಡು ಬಂದೆ…ನಂತರ ಒಂದು ದಿನ “ಮಿಠಾಯಿ ಮನೆ” pvr cinemas ನಲ್ಲಿ ತೆರೆಕಂಡಿತು..theater ಗೆ ಹೋಗಿ ಸಿನಿಮಾ ನೋಡಿದೆ…ಸಿನಿಮಾ ಆದ ಮೇಲೆ theaterನಲ್ಲಿ ಇದ್ದವರು ನನ್ನನ್ನು ನೋಡುತಿದ್ದನ್ನು ಕಂಡು..ಕೊಂಚ ನನಗೆ ಕೊಂಬು ಎದ್ದಿತು…ಆ ಕೊಂಬು ಯಾರೋ ಒಬ್ಬರು -”ಈ ಹುಡುಗ ನೋಡೆ…film ನಲ್ಲಿ ಒಂದ್ ಐದು ನಿಮಿಷ ಬಂದಿದ್ನಲ್ಲ…” ಎಂದ ಕೂಡಲೇ ಇಳಿದು ಹೋಯಿತು…

ಹೀಗೆ,ನನ್ನ ಜೀವನದಲ್ಲಿ “ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ…ರಂಗನಾಯಕಿ” ಹಾಗೆ ಸುಮ್ಮನೆ ಬಂದು ಹೋದರು….

 

……ಮುಗಿಯಿತು

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

ಆರತಿ ಫ್ರಂ ಜೆ.ಪಿ.ನಗರ!!-(ಭಾಗ-2)

Posted November 28, 2008 by Puneeth B.A.
Categories: ಪಿಸು..ಪಿಸು

ಭಾಗ-1 ರಿಂದ ಮುಂದುವರೆದಿದೆ…..

ಭಾಗ-2:

arathi-21

……………….2-ವಾರ ಆದಮೇಲೆ ಆರತಿ ಯವರ production manager ಒಂದು ಮಧ್ಯಾಹ್ನ ಫೋನ್ ಮಾಡಿದರು…ಅವಾಗ ನನಗೆ mid-term ಪರೀಕ್ಷೆ ನಡೆಯುತಿತ್ತು…ಸ್ಕೂಲ್ ಇಂದ ಬಂದ ಕೂಡಲೆ..ಅಮ್ಮ “ರೆಡಿ ಆಗೋ..ಆರತಿಯವರ ಮನೆಗೆ ಹೋಗ ಬೇಕು…screen test ಇದೆಯಂತೆ…3.30 ಗೆ ಬನ್ನಿ ಅಂತ ಹೇಳಿದ್ದಾರೆ…”ಎಂದರು…ನಾನು ಬೇಗ ತಿಂದು ರೆಡಿಯಾದೆ…ನನಗೆ ಒಳಒಳಗೆ ಭಯ..ನಾನು,ಅಕ್ಕ,ಅಮ್ಮ ಮನೆಯಿಂದ ಆಟೋ ಹಿಡಿದುಕೊಂಡು ಆರತಿಯವರ ಜೆ.ಪಿ.ನಗರದ “ಬೆಳ್ಳಿತೆರೆ”ಮನೆಗೆ ಹೊರಟೆವು…ಆಟೋದಲ್ಲಿ ಅಮ್ಮ ನನಗೆ ಟಿಪ್ಸ್ ಕೊಟ್ಟಿದ್ದು..ಕೊಟ್ಟಿದ್ದೆ…”ಡೈಲಾಗ್ ಜೋರಾಗಿ ಹೇಳು…ಹೆದರುಕೊ ಬೇಡ…ಜಾಸ್ತಿ ಮೇಕಪ್ ಮಾಡಬೇಡಿ ಅಂತ ಹೇಳು…ನಿನಗೆ ಅಲರ್ಗಿ ಆಗಿ ಸಿನ್ ಬರುತ್ತೆ…”ಹೀಗೆ ಅಮ್ಮ ನನ್ನ ಡೈರೆಕ್ಟ್ ಮಾಡಿದರು…ಬೆಳ್ಳಿತೆರೆ ಬಂತು…ಬಹಳ ದೊಡ್ದದಾದ ಮನೆ…ಎಷ್ಟೆ ಆಗಲಿ ರಂಗನಾಯಕಿಯ ಮನೆಯಲ್ಲವೆ..ದೊಡ್ಡದಾಗಿಯೇ ಇರಬೇಕು…ಅವರ ಮನೆಯ ಗೇಟ್ ತೆರೆದು ಒಳಗೆ ಹೋದೆವು…ಅಲ್ಲಿ ನನ್ನಂತೆಯೇ 5-6 ಮಕ್ಕಳು ಬಂದಿದ್ದರು…ಮನೆಯಲ್ಲಿ ಭಾರಿ ಲೈಟ್ ಗಳು,ರಿಫ್ಲೆಕ್ಟರ್ಗಳು..ಅದರ ಮೇಲೆ..ACTION…CUT…ಎಂದು ಆರತಿಯವರ ಅರಚಾಟ…ಮನೆಯ ತುಂಬಾ ಜನ…ಆರತಿಯವರ ನನ್ನನ್ನು ಕಂಡು “ಚೆನ್ನಾಗಿದ್ದಿಯಾ?…ಹೋಗಿ ಮೇಕಪ್ ಮಾಡಿಸಿಕೊಳ್ಳಪ್ಪ…ಸುರೇಶ್..ಈ ಹುಡುಗನಿಗೆ ಮೇಕಪ್ ಮಾಡ್ರಪ್ಪ…..”ಎಂದರು..ನಾನು ಹೋಗುವ ಅಷ್ಟರಲ್ಲಿ screen test ನಡೆಯಿತಿತ್ತು…ಮೇಕಪ್ ಆದಮೇಲೆ…ನನಗೆ ಡೈಲಾಗ್ ಕೊಟ್ರು…ಆ ಡೈಲಾಗ್ ಹೀಗಿತ್ತು”ಅಪ್ಪ…ಸ್ಕೂಲ್ ಅಲ್ಲಿ ಪಿಕ್-ನಿಕ್ ಗೆ ಹೋಗುತ್ತಿದ್ದಾರೆ…ನನ್ನ ಫ್ರೆಂಡ್ಸ್ ಎಲ್ಲಾ ಪಿಕ್-ನಿಕ್ ಗೆ ಹೋಗ್ತಾ ಇದ್ದಾರೆ..ನಾನು ಹೋಗ್ತೀನಿ…ದುಡ್ಡು ಕೊಡಪ್ಪ….”ಈ ಡೈಲಾಗನ್ನು ನಾನು ಹುರು ಹೋಡೆದು ಅವರಿಗೆ ನಾನು ರೆಡಿಯಂದೆ…ಅವರು ಒಂದು monitor ಮಾಡೋಣ ಎಂದರು…ನನಗೆ ಅರ್ಥ ಆಗಲ್ಲಿಲ್ಲ…ಆದರೂ ಸುಮ್ನೆ ‘ಸರಿ’ ಅಂದು ಹೋದೆ…ರೆಡಿ action ಎಂದರು…ನಾನು ಡೈಲಾಗ್ ಅನ್ನು ಮನೆ ಕಿತ್ತುಹೋಗುವ ಹಾಗೆ ಜೋರಾಗಿ ಮತ್ತು ಫಾಸ್ಟ ಆಗಿ ಹೇಳಿದೆ…ಇದನ್ನು ಕೇಳಿದ ಆರತಿಯವರು “cut it…ಎನ್ನಪ್ಪ…ನಿನ್ನ voice.u.u ಇಷ್ಟು ಜೋರು…slow ಆಗಿ soft ಆಗಿ ಹೇಳಬೇಕಪ್ಪ”ಎಂದರು..ನನಗೆ ನಾಟಕದಲ್ಲಿ ಅಭಿನಯಿಸಿದ ಅನುಭವವಿತ್ತು…ಅಲ್ಲಿ ಕಿರುಚಿ..ಕಿರುಚಿ…ಇಲ್ಲೂ ಕಿರುಚ ಬೇಕೆಂದುಕೊಂಡೆ….ಇನ್ನೊಂದು monitor ಮಾಡಿ..ಟೇಕ್ ತೆಗೆದು ಕೊಂಡರು…ಟೇಕ್ ಒ.ಕೆ ಯಾಯಿತು…ಆಮೇಲೆ..ಆರತಿಯವರು ಬಂದವರಿಗೆಲ್ಲಾ ಬಾದಾಮಿ ಹಾಲು ತರಿಸಿ ಕೊಟ್ಟರು…ನಂತರ “ಯಾರು select ಆಗಿದ್ದಾರೆಂದು ಫೋನ್ ಮಾಡಿ ತಿಳಿಸಿತ್ತೆವೆ ಎಂದರು….”ಆಮೇಲೆ ಖುಷಿಯಿಂದ ಹೊರಗಡೆ ಬಂದೆವು…ಅಲ್ಲೆ ಜೆ.ಪಿ.ನಗರದಲ್ಲಿ ಹತ್ತಿರವಿದ್ದ  ನಮ್ಮ ಕೋಮಲ ಆಂಟಿ(ನನ್ನ ಅಮ್ಮನ ಸಹೋದರಿ..ಅಂದರೆ ನನಗೆ ಚಿಕ್ಕಮ್ಮ) ಮನೆಗೆ ಹೋದೆವು…ಸ್ವಲ್ಪ ಹೊತ್ತು ಮಾತನಾಡಿ ಅಲ್ಲಿಂದ ನಮ್ಮ ಮನೆಗೆ ಹೊರಟೆವು…ಮನೆಯಲ್ಲಿ ಅಪ್ಪ-ಅಜ್ಜಿಯ ಮುಂದೆ ಮತ್ತೊಮ್ಮೆ performance ಆಯಿತು…

1-ವಾರ ಕಳಿದ ಮೇಲೆ ಆರತಿಯವರೆ ನಮ್ಮ ಮನೆಗೆ ಫೋನ್ ಮಾಡಿದರು…ನಮ್ಮ ಅಮ್ಮನ ಬಳಿ ಮಾತನಾಡಿದರು…”ಪುನೀತ್ ,screen ಮೇಲೆ ಬಹಳ ಪುಟ್ಟವನ ತರ ಕಾಣ್ತಾನೆ..ಅದಕ್ಕೆ ಅವನಿಗೋಸ್ಕರ ಒಂದು special role ಕೊಡುತ್ತಿದ್ದೇನೆ….film ಅಲ್ಲಿ ಒಂದು ಬೊಂಬೆಯಾಟದ ದೃಶ್ಯ ಬರುತ್ತೆ…ಅದರ ನಿರೂಪಕನ ಪಾತ್ರ ಪುನೀತ್ ಗೆ ಕೊಡುತ್ತಿದ್ದೇನೆ..ಬಿಂಬದ ಪ್ರಕಾಶ್ ಹತ್ತಿರ ಮಾತಾಡಿ ಒಂದು ಬೊಂಬೆಯಾಟಕ್ಕೆ ಅವನನ್ನು ರೆಡಿಮಾಡಲು ಹೇಳುತ್ತೇನೆ..ಬಾಯ್”ಎಂದರು…

ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ….

…ಭಾಗ-3 ರಲ್ಲಿ ಮುಂದುವರೆಯುವುದು…..

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

ಆರತಿ ಫ್ರಂ ಅಮೇರಿಕಾ!!-(ಭಾಗ-1)

Posted November 16, 2008 by Puneeth B.A.
Categories: ಪಿಸು..ಪಿಸು

ಭಾಗ-1:

picture13

“ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ…ರಂಗನಾಯಕಿ”

‘ರಂಗನಾಯಕಿ’ 20 ವರ್ಷ ಅಮೇರಿಕಾದಲ್ಲಿದ್ದು 2005 ರಲ್ಲಿ ಬೆಂಗಳೂರಿಗೆ ವಾಪಾಸ್ ಆದರು..ಆಗ ಅವರು ಮೊದಲು ಬಂದದ್ದು ಹನುಮಂತನಗರ ಬಿಂಬಕ್ಕೆ…ಆಗ ನಾನು ಬಿಂಬದ ವಿದ್ಯಾರ್ಥಿ ಆಗಿದ್ದೆ..ಅವರು ಬಿಂಬಕ್ಕೆ ಬಂದದ್ದು ೨ನೇ ತಿಂಗಳ ಮನರಂಜನಾ ಕಾರ್ಯಕ್ರಮಕ್ಕೆ…ಇನ್ನೊಂದು,ಅವರು ನಿರ್ದೇಶಿಸಲು ಹೊರಟ್ಟಿದ್ದ ಮಕ್ಕಳ ಚಿತ್ರ-’ಮಿಠಾಯಿ ಮನೆ’ಕ್ಕೆ ಮಕ್ಕಳ ’selection’.ಕಾರ್ಯಕ್ರಮಕ್ಕೂ ಮುನ್ನ ವನಮಾಲ ಆಂಟಿ(ಬಿಂಬದ ಸಂಚಾಲಕಿ) ನನ್ನ,ಅಕ್ಷರ,ದೀಕ್ಷ,ಭುವನಮಿತ್ರ ನ ಅರತಿಯವರ ಮುಂದೆ ಕರೆದುಕೊಂಡು ಹೋದರು…ಆರತಿಯೊಂದಿಗೆ ಅವರ ಮಗಳು ಯಶಸ್ವಿನಿ ಕೂಡ ಬಂದಿದ್ದರು..ಅವರದು english ಪ್ರೇಮ..ಆರತಿಯವರದ್ದು ಕಂglish ಪ್ರೇಮ…ಎಷ್ಟೆ ಆಗಲಿ 20 ವರ್ಷ ಅಮೇರಿಕಾದಲ್ಲಿ ಇದ್ರಲ್ಲ…ಕನ್ನಡ ಮರೆಯುವುದು ಸಹಜ..20 ವರ್ಷದಲ್ಲಿ ಅವರು englishiಗರ ಮನವ ಸೂರೆಗೊಂಡಿದ್ದರು…ಆ ವಿಷಯ ಬಿಡಿ…ಅರತಿಯವರು ನಮ್ಮನ್ನು ಕಂಡು ‘ಚೆನ್ನಾಗಿದ್ದಿರಾ ?..how r u ?’ಅಂತ ಕೇಳಿದ್ದೆ ತಡ..ನನ್ನ ಹಲ್ಲು ನನಗೆ ಗೊತ್ತಿಲ್ಲದೆ ಒಪನ್ ಆಯ್ತು…ಅವರನ್ನ ಟಿ.ವಿ.ಲಿ ಮಾತ್ರ ನೋಡಿದ್ದೆ…ಟಿ.ವಿ.ಯಲ್ಲಿ ಉದ್ದ ಜಡೆ ಇತ್ತಲ್ಲ…ಇಲ್ಲಿ ನೋಡಿದರೆ ಬಾಯ್ ಕಟ್…!!ಅವರು “ನೀವೆಲ್ಲಾ film ಅಲ್ಲಿ ಮಾಡ್ತೀರಾ..?..ನಿಮ್ಮ ಅಪ್ಪ-ಅಮ್ಮ ಒಪ್ಪುತ್ತಾರಾ?” ಅಂತ  ಕೇಳಿದರು…ಕೇಳಿದ್ದೆ ತಡ ನಾವೆಲ್ಲರೂ…”o.k.” ಎಂದೆವು…ಅವರು ಕಿಲ-ಕಿಲ ಅಂತ ನಕ್ಕೆರು…ಅವರು ತಂದಿದ್ದ ಒಂದು ಬುಕನ್ನು ನಮ್ಮ ಕೈಯಲ್ಲಿ(ಬಾಯಲ್ಲಿ!!) ಒದಲು ಹೇಳಿದರು..ನಾವೆಲ್ಲೆರು ಒದಿದೆವು…ಅವರು ಒ.ಕೆ ಎಂದು ಹೇಳಿ ನಮ್ಮನ್ನು ಹೊರಗಡೆ ಕಳುಹಿಸಿದರು…ನಂತರ ಕಾರ್ಯಕ್ರಮ ಪ್ರಾರಂಭವಾಯಿತು….ನನ್ನದೆ ಪ್ರಮುಖ ಪಾತ್ರ..(ಬೊಂಬೆಯಾಟದ ಪ್ರಮುಖ ಪ್ರಾತ್ರಕ್ಕೆ ನನ್ನ ಧ್ವನಿ)..ಅವರು ಬೊಂಬೆಯಾಟ ನೋಡುತ್ತಿದ್ದರೂ..ನಾನು ಅವರನ್ನೆ ನೋಡುತ್ತಿದ್ದೆ….ಒಂದು ಡೈಲಾಗ್ ಹೇಳೊದು..ಮತ್ತೆ ಅವರ ಕಡೆ ತಿರುಗಿ ಅವರ expression ಎನು? ಅಂತ ನೋಡುತ್ತಿದ್ದೆ..ಕಾರ್ಯಕ್ರಮ ಆಯ್ತು..ಅವರು ಮಾತಾಡಿದರು,ಹೊರಟರು….ಮನೆಗೆ ರಾತ್ರಿ ಬಂದ ಮೇಲೆ ಅಮ್ಮಂಗೆ ಈ ವಿಷಿಯ ಹೇಳ್ದೆ…ಅಮ್ಮಂಗೆ ಫುಲ್ ಖುಷಿ…ಒಡಿ ಹೊಗಿ ದೇವರ ಮನೆಯಲ್ಲಿ ದೀಪ ಹಚ್ಚಿದರು…(ಸಂಜೆ ದೀಪ ಹಚ್ಚೊದು ಮರೆತು ಹೋಗಿದ್ದರು…ಅದಕ್ಕೆ ಈಗ ಹಚ್ಚಿದರು)…ಒಂದು ವಾರ ಫುಲ್ ನನ್ನ ಕನಸು “lights,camera,action” ಅಂತ ಡಿಸೈನ್ ಡಿಸೈನ್ ಆಗಿತ್ತು…ಎನೋ ಹೀರೋನೇ ಆಗಿಬಿಟ್ಟೆ ಅನ್ನೋ ಹಾಗೆ ಆಡಿದೆ..

2-ವಾರ ಆದಮೇಲೆ ಆರತಿ ಯವರ production manager ಒಂದು ಮಧ್ಯಾಹ್ನ ಫೋನ್ ಮಾಡಿದರು…

 

….ಭಾಗ-2ರಲ್ಲಿ ಮುಂದುವರೆಯುವುದು…

-ನಿಮ್ಮ ‘ಹಾಗೆ ಸುಮ್ಮನೆ’ಪುನೀತ್..

ದಕ್ಷಿಣೆ ಕೊಟ್ಟರೆ ಮಾತ್ರ ಪ್ರಸಾದ…

Posted October 21, 2008 by Puneeth B.A.
Categories: ಗುಸು..ಗುಸು..

bangalore-priests1

ಅದ್ ಯಾರೋ ದೊಡ್ದ ಮನುಷ್ಯರು “ದೇವರು ಕೊಟ್ಟರೂ,ಪೂಜಾರಿ ಕೊಡಲ್ಲ” ಅಂಥ ಹೇಳಿ ಹೋಗಿಬಿಟ್ಟರು…ಅದನ್ನು ನಿಜಮಾಡುವುದಕ್ಕಸ್ಕೋರ ನಮ್ಮ ಪೂಜಾರಿಗಳು ಹರಸಹಾಸ ಪಡುತ್ತಿದ್ದಾರೆ..ವರಕೊಡೋದಿರಲಿ,ಪ್ರಸಾದನೂ ನಿಟ್ಟಿಗೆ ಕೊಡಲ್ಲ…ದಕ್ಷಿಣೆ ಹಾಕಿದವರಿಗೆ ಮಾತ್ರ ಪ್ರಸಾದ..ಅದೂ ಆ ದಕ್ಷಿಣೆ 10ರೂ. ಆಗಿದ್ದರೆ ಚೂರು ಹೂವು ಮತ್ತು ಎರಡು ಬೆರೆಳಲ್ಲಿ ಹಿಡಿಯುವಷ್ಟು ಪ್ರಸಾದ..10ರೂ ಮೇಲಾದರೆ ಸರಿಯಾದ ಪ್ರಸಾದ…10ರೂ. ಕೆಳಗಿದ್ದರೆ ಪ್ರಸಾದವೂ ಇಲ್ಲ..ಹೂವಂಥೂ ಮೊದಲೇ ಇಲ್ಲ…ಯಾಕೀ ವ್ಯತ್ಯಾಸ…ಕೊಟ್ಟರೆ ಎಲ್ಲರಿಗೂ ಪ್ರಸಾದ ಕೊಡಲಿ..ಇಲ್ಲದಿದ್ದರೆ ಬೇಡ..ಒಬ್ಬರಿಗೊಂದು-ಇನ್ನೊಬ್ಬರಿಗೊಂದು ಮಾಡುವುದು ಬೇಡ..ಯಾರೂ ದೇವಸ್ಥಾನದ ಪ್ರಸಾದಕ್ಕೆ ಬರುವುದಿಲ್ಲ(ಬರುವ ಮಂದಿಯೂ ಇದ್ದಾರೆ..!!ಕ್ಷಮಿಸಿ!!)..ಬಂದವರಿಗೆ ಆ ದೇವರ ಮೇಲಿರುವ ಒಂದು ಹೂವು ಕೊಟ್ಟರೆ ಸಾಕು..ಇದು ಬೆಂಗಳೂರಲ್ಲಿ ಸರ್ವೇ ಸಮಾನ್ಯವಾಗಿ ನಡಿತಾ ಇದೆ..ಇಲ್ಲದಿದ್ದರೆ ಆ ಪುರೋಹಿತರ ಕತ್ತಲ್ಲಿ ಚಿನ್ನದ ಸರಗಳು ಹೇಗೆ ಬರುತ್ತೆ…ಪುರೋಹಿತರು “ಲಕ್-ಪತಿ”ಗಳಾಗಿ ಯಾವುದೇ “ರಿಯಲ್-ಎಸ್ಟೇಟ್ ಎಜೆಂಟ್” ಕಮ್ಮಿ ಇಲ್ಲದ ಹಾಗೆ ಕೈಗೆ ಬ್ರೆಸ್ ಲೆಟ್,ಕತ್ತಿಗೆ ಹಗ್ಗದ ತರಹದ 5-6 ಚಿನ್ನದ ಸರ,ಗೋಲ್ಡ್ ಸ್ಟ್ರಾಪ್ ವಾಚ್…ಇಷ್ಟೆಲ್ಲ ಸಾಲದು ಅಂತ ಪ್ರಸಾದ ಕೊಡೋಕೆ ಕೂತಿರುತ್ತಾರಲ್ಲ ಪೂಜಾರಿ-ಹೆಂಡ್ತಿ..ಅವರು ಸಾಕ್ಷಾತ್ ಲಕ್ಷ್ಮಿ ಆಗಿ ಬಿಟ್ಟಿರುತ್ತಾರೆ..ನಕ್ಕಿದರೆ ಮುತ್ತು ಉದಿರು ಹೋಗುತ್ತೆ ಎನೋ ಹಾಗೆ ದೆವ್ವ ಬಡಿದಿರುವವರ ತರಹ ಮುಖದ ಮೇಲೆ ಯಾವುದೇ ಭಾವವಿಲ್ಲದೆ ಕೂತು ಪ್ರಸಾದ ಕೊಡುತ್ತಾರೆ….ಇಂಥ ಹೈ-ಟೇಕ್ ಪುರೋಹಿತರಿಗೆ ಪಾಠ ಕಲಿಸಬೇಕು…ಪೂಜೆ ಮಾಡೋದನ್ನ business ಮಾಡಿಕೊಂಡಿದ್ದಾರೆ ಹಾಳಾದವರು..

ಈಗ ಆ ದೇವರು ಕೊಡುವುದಿರಲಿ,ಪೂಜಾರಿಯ ಕೊಡುವುದಿಲ್ಲ…

ಗಪ್-ಚಿಪ್…

 

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್