MAA-KANNADA SHORT FILM

Woman is a symbol of patience. She plays different roles as a mother,sister,wife. She works for the development of her family both inside and outside th house. She faces all unexpected turns of life with courage and confidence. Even when she feels her life is INCOMPLETE,she turns towards the COMPLETENESS of her life.The sound of the celebration of her completeness….”MAA…”

A short film directed by 18 year old director PUNEETH B A throws light on the life of an orphaned wife who takes care of her child and shows the society that a woman can lead life even without the assistance of a man.

CAST AND CREW:
A M Prakash – Husband
Karuna – Wife
Savya – Child

Concept-Story-Screenplay-Editing-Cinematography-Direction: PUNEETH B A

Posted in Uncategorized | Leave a comment

ಸಪ್ತರಂಗಿ!!

ಸಪ್ತರಂಗಿ..ಸಪ್ತರಂಗಿ..
ಸಪ್ತ ಬಣ್ಣಗಳೇ ನಿನ್ನ ಅಂಗಿ

ರಂಗು ರಂಗು ರಂಗಿದೆ
ಮನಕೆ ನಲಿವು ತಂದಿದೆ
ಕಾಮನ್ ಬಿಲ್ಲು ಮೂಡಿದೆ
ಬಾನು ರಂಗೇರಿದೆ

ಸಪ್ತರಂಗಿ..ಸಪ್ತರಂಗಿ..
ಸಪ್ತ ಬಣ್ಣಗಳೇ ನಿನ್ನ ಅಂಗಿ

ಪುರ್ ಅಂತ ಹಾರುವೆ
ಖುಷಿಯ ಹಂಚಿ ಹೋಗುವೆ
ನಗುವ ಬುತ್ತಿ ಹೊತ್ತು ನೀನು
ಬೆಳ್ಳಿ ಬೆಳಕ ತೋರುವೆ

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್

Posted in ಕವಿಯ ಕಾವ್ಯಧಾರೆ.. | Leave a comment

ಗಾಳಿಪಟ!!

ಹೇ ಗಾಳಿಪಟ..

ರಂಗು-ರಂಗಿನ ಗಾಳಿಪಟ

ಭೂಪಟವೇ ಚಿತ್ರಪಟ

ಹಾರಾಟವೇ ನಿನ್ನ ಹಟ

 

ಬಾಲಂಗೊಚಿಯ ಪಟ-ಪಟ ಬಡಿದು

ಕನಸಿನ ಲೋಕದ ಬೀಗವ ಹಿಡಿದು

ಬಾನಿಗೆ ಹಾರೋ ಪಟ

ಮುಗಿಲಿಗೆ ಮುತ್ತಿಡೊ ಹಟ

 

ಬಾನಿಗೆ ಬಣ್ಣ ತುಂಬುವ ಆಸೆ

ಮೋಡವ ಕಂಡು ನಲಿಯುವ ಆಸೆ

ಬಣ್ಣ-ಬಣ್ಣದ ಪಟವು ಇದುವೆ

ಚಂದ್ರನೆ ನಾಚುವ ಬೆಳಕು ಇದುವೆ

 

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್

Posted in ಕವಿಯ ಕಾವ್ಯಧಾರೆ.. | Leave a comment

ಹಾಗೆ ಸುಮ್ಮನೆಯಲ್ಲಿ ಬಿ.ಸುರೇಶ್!!

ಬಿ.ಸುರೇಶ್ – ಕನ್ನಡದ ಉತ್ತಮ ನಿರ್ದೇಶಕ.ಹದ ಗೆಟ್ಟು,ಕಥೆಯನ್ನೇ ಹಾಳು ಮಾಡಿ ಧಾರಾವಾಹಿಗಳನ್ನು ಮಾಡುವ ಸಮಯದಲ್ಲಿ,ಬಿ.ಸುರೇಶ್ ರವರ ‘ನಾಕು ತಂತಿ’ ಮತ್ತು ‘ತಕಧಿಮಿತಾ’ ತಂತಿ ತಪ್ಪದೆ ಸರಿ ಹಾದಿಯಲ್ಲಿ ಹೋಗುತ್ತಿರುವುದು ಬಹಳ ವಿಶೇಷ.ಬಿ.ಸುರೇಶ್ ಬಹಳ ಒಳ್ಳೆಯ ಬರಹಗಾರ,ನಿರ್ದೆಶಕ,ರಂಗಕರ್ಮಿ,ನಟ(ಅಧ್ಬುತ!!).

ಬಿ.ಸುರೇಶ್ ರವರು ನನಗೆ ಮತ್ತು ನನ್ನ ಪ್ರೀತಿಯ ಬ್ಲಾಗ್ ‘ಹಾಗೆ ಸುಮ್ಮನೆ’ ಗೆ ಕೆಲವು ಹಿತನುಡಿಗಳನ್ನು ಕಳುಹಿಸಿದ್ದಾರೆ.ಅದನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟ ಪಡುತ್ತೀನಿ.ನೀವೂ ಒದಿರಿ.

“ನಾನು ಬರೆದುದೆಲ್ಲವೂ ಹಾಗೇ ಸುಮ್ಮನೆ.

ಅವುಗಳಿಂದ ನಿಮಗೇನಾದರೂ ದಕ್ಕಿದ್ದರೆ ಅದೂ ಹಾಗೇ ಸುಮ್ಮನೆ.

ಬದುಕು ಅನ್ನೋದೇ ಹಾಗೇ ಸುಮ್ಮನೆ

ದಕ್ಕಿಸಕೊಳ್ಲಬೇಕೆಂದಿಲ್ಲ.

ಬದುಕಬೇಕಷ್ಟೆ, ಹಾಗೇ ಸುಮ್ಮನೆ

-ನಿಮ್ಮವ
ಬಿ.ಸುರೇಶ”

-‘ಹಾಗೆ ಸುಮ್ಮನೆ’ ಪುನೀತ್

Posted in ಪಿಸು..ಪಿಸು | Leave a comment

ಬಣ್ಣದ ಲೋಕ

ಬಣ್ಣದ ರೆಕ್ಕೆಯ ಬೆನ್ನಲಿ ಮೂಡಿಸಿ

ಹಾರುವ ಹಕ್ಕಿ ಆಗೋಣ

ಬಣ್ಣದ ಲೋಕಕೆ ಹೋಗೋಣ

ತೇಲುತಾ..ಹಾರುತಾ ಹೋಗೋಣ

 

ಜಿಗಿಯುತಾ ಜಾಲಿ ಮಾಡೋಣ

ತೆಲುತಾ..ಹಾರುತಾ ಹೋಗೋಣ

ಶಾಲೆಯ ಗೋಜು ಅಲ್ಲಿಲ್ಲ

ಬಣ್ಣಗಳಾಟ ನಮಗೆಲ್ಲಾ..

 

ಲೋಕದ ಬಾಗಿಲು ತೆರೆದಿತ್ತು

ಬಣ್ಣದ ಹೊಳೆಯು ಹರಿದಿತ್ತು

ಕಾಮನಬಿಲ್ಲು ಅಲ್ಲಿತ್ತು

ಸ್ವಾಗತ ಮಾಡಲು ಗುಲಾಬಿ ಸಾಲೆ ಅಲ್ಲಿತ್ತು..

 

-ನಿಮ್ಮ ‘ ಹಾಗೆ ಸುಮ್ಮನೆ ‘ಪುನೀತ್.ಬಿ.ಎ.

Posted in ಕವಿಯ ಕಾವ್ಯಧಾರೆ.. | Leave a comment

ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…

Picture

ಲಂಚ ತೆಗೆದುಕೊಳ್ಳೋರ ಮಕ್ಕಳು ಲೂಸ್ ಮಾದ ಆಗ್ತಾರಂತೆ….ಮೆಂಟಲ್ ಮಂಜಿ ಆಗ್ತಾರಂತೆ..

ಈ ವಿಷಯನಾ ನಾನ್ ಹೇಳುತಿರುವುದಲ್ಲ…ಲಂಚ ತಗೋಂಡ  ಮಹಾ ಪುರುಷರ ಮಕ್ಕಳನ್ನು ನೋಡಿ ಈ ಮಾತನ್ನು ಹೇಳುತಿದ್ದೇನೆ…ಲಂಚ ತಗೋಳೊದು ಕೆಮ್ಮು , ನೆಗಡಿ ತರಹದ ಕಾಯಿಲೆಯಲ್ಲ…diabetes ತರಹದ ಕಾಯಿಲೆ..ಒಂದು ಸತಿ ಬಂದ್ರೆ…ಜಪ್ಪಯ್ಯ ಅಂದ್ರೂ ಹೋಗುವುದಿಲ್ಲ…ಒಂದು ಸತಿ ಲಂಚಕ್ಕೆ ತೆಗೆದ ಬಾಯಿ ಮುಚ್ಚುವುದಿಲ್ಲ..ಲಂಚ ಅಂದ್ರೆ ಇನ್ನೊಬ್ಬರ ಶಾಪ ಅಂತ ಅರ್ಥ..ಲಂಚ ಕೊಡುವ ಯಾರಾದರೂ ಪ್ರೀತಿಯಿಂದ,ಅಕ್ಕರೆಯಿಂದ ಕೊಟ್ಟಾರಿಯೇ??ಶಾಪ ಹಾಕಿ ಕೊಡುತ್ತಾರೆ…ಇದು ಹೇಗೆ ಲಂಚ ತೆಗೆದುಕೊಂಡವರಿಗೆ ಒಳ್ಳೆದನ್ನ ಮಾಡಿತು…ಅವರುಗಳು ಮಾಡುವ ಕಚಡಾ ಕೆಲಸಕ್ಕೆ ಪಾಪ ಅವರ ಮಕ್ಕಳು ಬಲಿಯಾಗುತಿದ್ದಾರೆ…ಲಂಚ ತೆಗೆದುಕೊಂಡವರ ಮಕ್ಕಳು ಹುಚ್ಚಾರಾಗುತ್ತಿದ್ದಾರೆ..ಒಬ್ಬ(????) ಸಕತ್ತಾಗಿ ಲಂಚ ಹೋಡಿತಾನೆ..ಪಾಪ ಅವನ ಮನೆಯಲ್ಲಿ ಮಕ್ಕಳು–ಒಂದು ಹುಟ್ಟಿದಂದಿನಿಂದ ಕೈಯಿಲ್ಲದೆ ಹೋದರೆ,ಇನ್ನೊಂದಕ್ಕೆ ತಲೆ ಸರಿಯಿಲ್ಲದೆ ಸದಾ ಮಂಚದ ಮೇಲೆ ಬಿದ್ದಿರುತ್ತೆ…ಇದು ಬೇಕಾ..ಅಷ್ಟೊಂದು ಹಣ ದುಡಿದು ಎನು ತಿಥಿಗೆ ಇಟ್ಕೊತಾರ…     ಇನ್ನೊಬ್ಬರಿದ್ದಾರೆ (????)-ಅವರೂ ಸಕತ್ತಾಗಿ ಲಂಚ ಹೋಡಿತಾರೆ…ಆದರೆ ಎನು ಮಾಡೋದು..ಮನೆಯಲ್ಲಿ ಮಗನಿಗೆ ಹುಚ್ಚು…ಆ ಮಗನಿಗೆ ಹುಚ್ಚು ಅಂದು ಬಿಟ್ಟು, ಮನೆಯ ತುಂಬಾ ನಾಯಿಗಳನ್ನ ಸಾಕಿದ್ದಾರೆ(ಅಕ್ರಮ ದುಡ್ಡನ್ನು ರಕ್ಷಿಸಲು)..ಆ ನಾಯಿಗಳನ್ನು ಕರೆದುಕೊಂಡು ಇವರು ವಾಕಿಂಗ್ ಹೋಗ್ತಾರೆ…ಅದು ಒಡುತಿರುತ್ತದೆ…ಅದರ ಹಿಂದೆ ಇವರು ಒಡುತಿರುತ್ತಾರೆ…ಯಾರು ನಾಯಿ…ಯಾರು master ಎಂಬುದೇ ಗೊತ್ತಾಗುವುದಿಲ್ಲ….ಇಬ್ಬರು ದೂರದಿಂದ ನೋಡಿದರೆ ಒಂದೇ ರೀತಿ ಕಾಣ್ತಾರೆ…ಇಬ್ಬರೂ ಒಂದೆ ಜಾತಿಯಲ್ವ…ನಾಯಿ  ಮೂಳೆಯನ್ನು ನೋಡಿ ಜೊಲ್ಲು ಸುರಿಸುತ್ತೆ…ಲಂಚಕೋರ ಹಣವನ್ನು ನೋಡಿ ಜೊಲ್ಲು ಸುರಿಸುತ್ತಾನೆ….ಇವೆಲ್ಲವನ್ನೂ ಕಂಡರೆ…ನಾನು ಹೇಳಿದ ವಿಚಾರ ನಿಜ ಎನಿಸುತ್ತದೆ….ಇದು ಸುಮ್ಮನೆ ಕೇಳಿ ನಕ್ಕು ಸುಮ್ಮನಾಗುವ ವಿಷಯವಲ್ಲ….ಯಾರದೋ ತಪ್ಪಿಗೆ….ಯಾರೋ ಯಾಕೆ ನೋವು ಅನುಭವಿಸ ಬೇಕು…ದೇವರು ಹಾಗೆ ಸುಮ್ಮನೆ  ಕೂತು ಕೈ ಚಳಕ ತೋರಿಸುತ್ತಿದ್ದಾನೆ…ಈಗಲಾದರು ಎಚ್ಚರಗೊಳ್ಳಿ “ಮಿ.ಲಂಚನಾಥ್”..

ಎಲ್ಲರಿಗೂ ಹೇಳಿ:”ಲಂಚ ತೆಗೆದುಕೊಂಡರೆ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗ್ತಾರೆ…”

ಈ ವಿಚಾರ ಮಕ್ಕಳು ಲೂಸ್ ಮಾದ-ಮೆಂಟಲ್ ಮಂಜಿ ಆಗೋ ಮುನ್ನ ತಿಳಿಸಿ..!!!

 -ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್….

Posted in ಗುಸು..ಗುಸು.. | 1 Comment

ನಾನೇ ಆರತಿ!!-(ಭಾಗ-3)

ಭಾಗ-2 ರಿಂದ ಮುಂದುವರೆದಿದೆ….

ಭಾಗ-3:

………..ಅಷ್ಟು ಹೊತ್ತಿಗೆ ನಾನು ಆರತಿಯಾಗಿದ್ದೆ…ಅರ್ಥ ಆಗಲಿಲ್ವ…ನಾನು ಆರತಿಯವರ ತರಹನೇ ಮಿಮಿಕ್ರಿ ಮಾಡಲು ಆರಂಭಿಸಿದ್ದೆ…ಆ ಮಿಮಿಕ್ರಿಗೆ ಪ್ರೋತ್ಸಾಹಿಸಿದವರು ಬಿಂಬದ ಮಂದಿ…ಬಿಂಬಕ್ಕೆ ಬರುವ ಅತಿಥಿಗಳ ಮುಂದೆಯಲ್ಲ ನಾನು ಆರತಿ ತರ ಮಾಡಲು ಆರಂಬಿಸಿದೆ…ತಾತ(ಎ.ಎಸ್.ಮೂರ್ತಿ)ಅವರು ಮಿಮಿಕ್ರಿ ಮಾಡಲು ಕರದಾಗಲೆಲ್ಲ..ಖುಷಿಯಿಂದ ಹೋಗಿ ಮಾಡು ಬರುತಿದ್ದೆ..ನನ್ನ ಹೆಸರು ತಿಳಿಯದ ಕೆಲವರು ನನ್ನನ್ನು ‘ಆರತಿ’ಎಂದೆ ಕರಯಲು ಪ್ರಾರಂಭಿಸಿದರು…ಕೆಲವೊಮ್ಮೆ ಇದರಿಂದಾಗಿ ಮುಜುಗುರವೂ ಆಗುತಿತ್ತು…ಆ ವಿಷಯ ಬಿಡಿ..ನಂತರ ಆರತಿಯವರು ಪ್ರಕಾಶ್ ಸರ್ ಗೆ ಎಲ್ಲವನ್ನು ಹೇಳಿದರು…ಸರ್ ನನ್ನ ಕರೆದು ಒಂದು ವಾರದ ಕಾಲ ಒಂದು ಬೊಂಬೆಯಾಟದ ದೃಶ್ಯವನ್ನು ಹೇಳಿಕೊಟ್ಟರು..ಕಲಿತ ಮೇಲೆ ಒಂದು ದಿನ ಆರತಿಯವರು ಬಿಂಬಕ್ಕೆ ಬಂದು..ನಾನು readyಯಾಗಿದ್ದ ದೃಶ್ಯವನ್ನು ಮಾಡಲು ಹೇಳಿದರು…ಮಾಡಿದ ಮೇಲೆ ಒಂದು ಮುತ್ತು ಕೊಟ್ಟು ಹೋದರು…(ಎಷ್ಟೆ ಆಗಲಿ ಅಮೇರಿಕದವರು ತಾನೆ…)ನಂತರ shooting ಅಕ್ಕಯ್ಯಮ್ಮನ ಬೆಟ್ಟದಲ್ಲಿ ನಡೆಯಿತು…shootingಗೆ ನನ್ನ ಜೊತೆ ಅನ್ವಿತಾ,ರೋಹಿತ್,ಕಿರಣ್,ಬಿಂದು(ಈಗ ಅವಳು ನಮ್ಮೊಂದಿಗಿಲ್ಲ…) ಎಲ್ಲರೂ ಬಂದರು…shooting ಚೆನ್ನಾಗಿ ನಡೆಯಿತು…shooting spotಲ್ಲಿ ಬಹಳ ವಿನೋದ ನಡೆಯಿತು…ಸಂಜೆ ಮನೆಗೆ ಬಂದೆ…ಸ್ವಲ್ಪ ದಿನ ಆದ ಮೇಲೆ ಹೋಗಿ dubbing ಮಾಡಿಕೊಂಡು ಬಂದೆ…ನಂತರ ಒಂದು ದಿನ “ಮಿಠಾಯಿ ಮನೆ” pvr cinemas ನಲ್ಲಿ ತೆರೆಕಂಡಿತು..theater ಗೆ ಹೋಗಿ ಸಿನಿಮಾ ನೋಡಿದೆ…ಸಿನಿಮಾ ಆದ ಮೇಲೆ theaterನಲ್ಲಿ ಇದ್ದವರು ನನ್ನನ್ನು ನೋಡುತಿದ್ದನ್ನು ಕಂಡು..ಕೊಂಚ ನನಗೆ ಕೊಂಬು ಎದ್ದಿತು…ಆ ಕೊಂಬು ಯಾರೋ ಒಬ್ಬರು -”ಈ ಹುಡುಗ ನೋಡೆ…film ನಲ್ಲಿ ಒಂದ್ ಐದು ನಿಮಿಷ ಬಂದಿದ್ನಲ್ಲ…” ಎಂದ ಕೂಡಲೇ ಇಳಿದು ಹೋಯಿತು…

ಹೀಗೆ,ನನ್ನ ಜೀವನದಲ್ಲಿ “ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ…ರಂಗನಾಯಕಿ” ಹಾಗೆ ಸುಮ್ಮನೆ ಬಂದು ಹೋದರು….

 

……ಮುಗಿಯಿತು

-ನಿಮ್ಮ ‘ಹಾಗೆ ಸುಮ್ಮನೆ’ ಪುನೀತ್..

Posted in ಪಿಸು..ಪಿಸು | Leave a comment